ಕುಂದಾಪುರ ಮಿರರ್ ಸುದ್ದಿ..
ಕೋಟ: ಶ್ರೀ ತಿರುಪತಿ ದಾಸಸಾಹಿತ್ಯ ನೊಂದಾಯಿತ ಇಲ್ಲಿನ ಕೋಟತಟ್ಟು ಪಡುಕರೆ ರಾಮಾಮೃತ ಭಜನಾ ಸಂಘ ಇದರ ವತಿಯಿಂದ ಶ್ರೀ ರಾಮ ನವಮಿ ಅಂಗವಾಗಿ ಪಡುಕರೆಯ ಭಗವತ್ ಭಜನಾ ಮಂದಿರದ ಶ್ರೀ ರಾಮ ದೇವರಿಗೆ ಬೆಳ್ಳಿ ಪ್ರಭಾವಳಿ ಸಮರ್ಪಣೆ ಗುರುವಾರ ವಿಜೃಂಭಣೆಯಿಂದ ನಡೆಯಿತು.
ಪೂರ್ವಾಹ್ನ ಕೋಟತಟ್ಟು ಪಡುಕರೆ ಸದ್ಯೋಜಾತ ದೇವಳದಿಂದ ಕಳಶ ಕುಂಭ ಮೆರವಣಿಗೆ ಮೂಲಕ ಶ್ರೀ ರಾಮದೇಗುಲಕ್ಕೆ ತರಲಾಯಿತು.
ಶ್ರೀ ದೇವರಿಗೆ ಅರ್ಪಿಸಿ ದೇಗುಲದ ತಂತ್ರಿಗಳಾದ ವೇ.ಮೂ ಮಧುಸೂಧನ ಬಾಯರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೆರಿಸಿದರು.
ಭಗವತ್ ಭಜನಾ ಮಂದಿರದ ಗೌರವಾಧ್ಯಕ್ಷ ಆನಂದ್ ಸಿ ಕುಂದರ್, ಅಧ್ಯಕ್ಷ ರಮಾನಂದ ಮೆಂಡನ್, ಅರ್ಚಕ ಬಾಬು ಪೂಜಾರಿ, ಶ್ರೀರಾಮಾಮೃತ ಭಜನಾ ಸಂಘದ ಪದಾಧಿಕಾರಿಗಳು, ಉದ್ಯಮಿ ಬಿಜು ನಾಯರ್, ಕುಶಲಕರ್ಮಿ ಶ್ರೀಕಾಂತ್ ಆಚಾರ್ಯ ಸಾಲಿಗ್ರಾಮ ಮತ್ತಿತರರು ಉಪಸ್ಥಿತರಿದ್ದರು. ಮಹಾಮಂಗಳಾರತಿ, ಭಜನಾ ಕಾರ್ಯಕ್ರಮ, ಮಹಾಅನ್ನಸಂತರ್ಪಣೆ ಕಾರ್ಯಕ್ರಮಗಳು ನೆರವೆರಿತು.