ಕುಂದಾಪುರ ಮಿರರ್ ಸುದ್ದಿ…
ಕೋಟ: ಶ್ರೀ ರಕ್ತೇಶ್ವರಿ ದೇವಸ್ಥಾನ ಮತ್ತು ಪರಿವಾರ ದೇವಸ್ಥಾನ ಪಾಂಡೇಶ್ವರ ಸಾಸ್ತಾನ ಅ. 15ನೇ ರವಿವಾರದಿಂದ ಅ.24ನೇ ಮಂಗಳವಾರದ ತನಕ ಶ್ರೀ ಕ್ಷೇತ್ರದಲ್ಲಿ ಶರನ್ನವರಾತ್ರಿ ಕಾರ್ಯಕ್ರಮ ನಡೆಯಲಿದೆ.
ಆ ಪ್ರಯುಕ್ತ ಅ.15ರ ರವಿವಾರ ಪ್ರಥಮ ನವರಾತ್ರಿ 22ನೇ ರವಿವಾರ ದುರ್ಗಾಷ್ಟಮಿ, 19ರಂದು ಲಲಿತಾ ಪಂಪಮಿ, 20ರಂದುಶಾರದಾ ಪೂಜೆ, 23ರಂದು ಸೋಮವಾರ ಮಹಾನವಮಿ, ದುರ್ಗಾಹೋಮ. ಮಧ್ಯಾಹ್ನ 1.00 ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆ,24ರಂದು ಮಂಗಳವಾರ ವಿಜಯ ದಶಮಿಯೊಂದಿಗೆ ಸಂಪನ್ನಗೊಳ್ಳಲಿದೆ ಎಂದು
ದೇಗುಲದ ಧರ್ಮದರ್ಶಿ ಕೆ.ವಿ ರಮೇಶ್ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.