ಕೋಟ ಪಂಚವರ್ಣ ಕಛೇರಿಯಲ್ಲಿ ಪುನಿತ್ರಾಜ್ ಕುಮಾರ್ ಎರಡನೇ ವರ್ಷದ ಪುಣ್ಯ ಸ್ಮರಣೆ
ಕುಂದಾಪುರ ಮಿರರ್ ಸುದ್ದಿ…
ಕೋಟ: ಪುನಿತ್ ರಾಜ್ ಕುಮಾರ್ ಓರ್ವ ನಟನಲ್ಲ ಬದಲಾಗಿ ಅವರೊಬ್ಬ ಅಸಮಾನ್ಯ ಸಾಧಕ ಶಕ್ತಿ ಎಂದು ಸಾಮಾಜಿಕ ಮುಖಂಡ ರಾಘವೇಂದ್ರ ಕುಂದರ್ ಅಭಿಪ್ರಾಯಪಟ್ಟರು.
ಭಾನುವಾರ ಪಂಚವರ್ಣ ಕಛೇರಿಯಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತ್ರತ್ವದಲ್ಲಿ ಪುನಿತ್ರಾಜ್ ಕುಮಾರ್ರವರ ಎರಡನೆ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಪುಷ್ಭನಮನಗೈದು ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಯ ಸಾಧನೆಯ ಹಿಂದೆ ಅವರ ಪರಿಶ್ರಮ ಅಡಗಿರುತ್ತದೆ ಅದನ್ನು ಸದ್ವಿನಿಯೋಗ ಮಾಡಿಕೊಂಡು ಸಾಮಾಜಿಕ ಕ್ಷೇತ್ರದಲ್ಲಿ ತೋಡಗಿಸಿಕೊಳ್ಳುವುದೇ ನಿಜವಾದ ಜೀವನವಾಗಿದೆ. ಅಂತಹ ಶಕ್ತಿಗಳಲ್ಲಿ ಪುನಿತ್ರಾಜ್ ಕುಮಾರ್ ಒಬ್ಬರು ತನ್ನ ಜೀವಿತ ಅವಧಿಯಲ್ಲಿ ಅವರ ಸಾಮಾಜಿಕ ಕಳಕಳಿ ತೆರೆಯ ಮರೆಯಲ್ಲಿ ಅವರ ಜನಮನ ತುಡಿತ ನಿಜಕ್ಕೂ ಅರ್ಥಪೂರ್ಣ ಎಂದು ತಮ್ಮ ಅಭಿಮತ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್ಯ ನುಡಿನಮನ ಗೈದರು.
ಪಂಚವರ್ಣ ಯುವಕಮಂಡಲದ ಸಂಘಟನಾಕಾರ್ಯದರ್ಶಿ ಗಿರೀಶ್ ಆಚಾರ್,ಪಂಚವರ್ಣ ಮಹಿಳಾ ಮಂಡಲದ ಕಾರ್ಯದರ್ಶಿ ಲಲಿತಾ ಪೂಜಾರಿ,ಸದಸ್ಯರಾದ ಶಕೀಲ ಎನ್ ಪೂಜಾರಿ,ಅಕ್ಷತಾ ಗಣೇಶ್ ,ಪಂಚವರ್ಣದ ಜೊತೆಕಾರ್ಯದರ್ಶಿ ಸಂದೇಶ್ ಆಚಾರ್,ಕೋಶಾಧಿಕಾರಿ ನಾಗರಾಜ್ ಪೂಜಾರಿ,ಸದಸ್ಯ ಕೃಷ್ಣ ಕಾಂಚನ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸಂಯೋಜಿಸಿದರು.