ಕುಂದಾಪುರ : CIER ಮೂಲಕ ಪತ್ತೆ ಹಚ್ಚಲಾದ ಮೊಬೈಲ್ ಗಳನ್ನು ವಾರೀಸುದಾರರಿಗೆ ಹಿಂತಿರುಗಿಸಿದ ಪೊಲೀಸರು – ಸಾರ್ವಜನಿಕರಿಗೆ ಜಾಗೃತಿ ಮಾಹಿತಿ

0
302

ಕುಂದಾಪುರ ಮಿರರ್ ಸುದ್ದಿ…

ಕುಂದಾಫುರ: ಕಳೆದ ಎರಡು ವರ್ಷಗಳಲ್ಲಿ ಮೊಬೈಲ್ ಕಳೆದಕೊಂಡು ಪೊಲೀಸ್ ದೂರು ನೀಡಿದ್ದ ಸಂತ್ರಸ್ಥ ದೂರುದಾರರ ಪೈಕಿ ಒಟ್ಟು 20 ಮೊಬೈಲ್ ಗಳನ್ನು ಕುಂದಾಪುರ ಪೊಲೀಸರ ತಂಡ ಪತ್ತೆ ಹಚ್ಚಿದ್ದು, ಪತ್ತೆ ಹಚ್ಚಲಾದ ಮೊಬೈಲ್ ಗಳನ್ನು ಗುರುವಾರ ಪೊಲೀಸರು ವಾರೀಸುದಾರರಿಗೆ ಹಿಂತಿರುಗಿಸಿದ್ದಾರೆ.

Click Here

Click Here

ಪತ್ತೆ ಹಚ್ಚಲಾಗಿದ್ದ 20 ಮೊಬೈಲ್ ಗಳ ಪೈಕಿ ಒಂದು ಮೊಬೈಲ್ ನ್ನು ಜಾರ್ಖಂಡಿನ ಹಜಾರಿಭಾಗ್ ಎಂಬಲ್ಲಿ ಮತ್ತು ಇನ್ನೊಂದು ಮೊಬೈಲನ್ನು ಆಂದ್ರ ಪ್ರದೇಶದ ಗೊಂಡಾಲಾ ಎಂಬಲ್ಲಿ ವಶಕ್ಕೆ ಪಡೆಯಲಾಗಿದೆ. ಉಳಿದ 18 ಮೊಬೈಲ್ ಗಳನ್ನು ಕರ್ನಾಟಕದ ವಿವಿಧೆಡೆಗಳಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುರುವಾರ ಬೆಳಿಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ CIER ಮೂಲಕ ಬ್ಲಾಕ್ ಮಾಡಲಾಗಿದ್ದ ಮೊಬೈಲ್ ಗಳನ್ನು ಅನ್ ಬ್ಲಾಕ್ ಮಾಡುವುದು ಹೇಗೆ ಮತ್ತು ಬಳಸುವುದು ಹೇಗೆ ಎಂಬ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಕಾರ್ಯಾಗಾರ ನಡೆಸಲಾಯಿತು. ಮೊಬೈಲ್ ಕಳೆದುಹೋದಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳನ್ನೂ ಇದೇ ಸಂದರ್ಭ ವಿವರಿಸಲಾಯಿತು.

ಈ ಸಂದರ್ಭ CIER ಮೂಲಕ ಪತ್ತೆ ತಂಡಕ್ಕೆ ಉಡುಪಿ ಎಸ್ಪಿ ಡಾ. ಕೆ.ಅರುಣ್ ಕುಮಾರ್ ಮಾರ್ಗದರ್ಶನ ನೀಡಿದ್ದಾರೆ. ಎಎಸ್ಪಿಗಳಾದ ಪರಮೇಶ್ವರ ಹೆಗ್ಡೆ ಹಾಗೂ ಸಿದ್ಧಲಿಂಗಯ್ಯ ನಿರ್ದೇಶನ ನೀಡಿದ್ದಾರೆ. ಡಿವೈಎ್ಸಪಿ ಬೆಳ್ಳಿಯಪ್ಪ ನೃತೃತ್ವ ವಹಿಸಿ ವೃತ್ತ ನಿರೀಕ್ಷಕ ನಂದಕುಮಾರ್ ಹಾಗೂ ಉಪ ನಿರೀಕ್ಷಕರಾದ ವಿನಯ್ ಕೊರ್ಲಹಳ್ಳಿ ಹಾಗೂ ಪ್ರಸಾದ್ ಕಾರ್ಯಾಚರಣೆ ನಡೆಸಿದ್ದಾರೆ. ಸಿಬ್ಬಂದಿಗಳಾದ ಸಿದ್ಧಪ್ಪ, ಮಾರುತಿ ಹಾಗೂ ಅವಿನಾಶ ತಂಡದಲ್ಲಿದ್ದರು.

Click Here

LEAVE A REPLY

Please enter your comment!
Please enter your name here