ಕುಂದಾಪುರ: ಮನೆಮೇಲೆ ಬಿದ್ದ ಮರ – ಮೂವರಿಗೆ ಗಾಯ, ಮನೆ‌ ಜಖಂ

0
160

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ನಗರದ ಖಾರ್ವಿಕೇರಿಯ ಕೆಳಕೇರಿ ಬಸವ ಖಾರ್ವಿ ಎಂಬುವರ ಮನೆಯ ಮೇಲೆ ತೆಂಗಿನ ಮರ ಬಿದ್ದ ಪರಿಣಾಮ‌ಮನೆ ಸಂಪೂರ್ಣ ಹಾನಿಗೀಡಾಗಿದ್ದಲ್ಲದೇ ಮನೆಯೊಳಗಿದ್ದ ಮೂವರು ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ಬುಧವಾರ ನಡೆದಿದೆ.

Click Here

Click Here

ವಿಪರೀತ ಗಾಳಿ ಮಳೆಯಿಂದಾಗಿ ಕುಸಿದ ಮರ ಮನೆಯ ಮೇಲೆ‌ ಬಿದ್ದಿದೆ. ಆ ಸಂದರ್ಭ ಅಲ್ಲಿಯೇ ಇದ್ದ ಬಸವ ಖಾರ್ವಿ, ಮಾಲತಿ, ಗೌರಿ ಎಂಬುವರಿಗೆ ಗಾಯಗಳಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನಾ ಸ್ಥಳಕ್ಕೆ ತಹಸೀಲ್ದಾರ್ ಶೋಭಾ ಲಕ್ಷ್ಮಿ, ವೃತ್ತ ನಿರೀಲ್ಷಕ ನಂದಕುಮಾರ್ ಭೇಟಿ ನೀಡಿ‌ಪರಿಶೀಲನೆ‌ ನಡೆಸಿದ್ದಾರೆ.

Click Here

LEAVE A REPLY

Please enter your comment!
Please enter your name here