ಕುಂದಾಪುರ: ನಮ್ಮ ಕುಂದಾಪುರ ಮೇಳಕ್ಕೆ ಚಾಲನೆ

0
145

ಕುಂದಾಪುರ ಮಿರರ್ ಸುದ್ದಿ…

Click Here

Click Here

ಕುಂದಾಪುರ : ಅ5 ಮತ್ತು 6ರಂದು ಆರ್.ಎನ್.ಶೆಟ್ಟಿಯ ಗಿಳಿಯಾರು ಕುಶಾಲ ಹೆಗ್ಡೆ ಸ್ಮಾರಕ ಸಭಾಂಗಣದಲ್ಲಿ ನಡೆಯುತ್ತಿರುವ “ನಮ್ಮ ಕುಂದಾಪುರ ಮೇಳ” ಉದ್ಘಾಟನೆಯನ್ನು ಕುಂದಾಪುರ ಅಮೃತಧಾರೆ ಲಯನ್ಸ್ ಕ್ಲಬ್ ನ ಅಧ್ಯಕ್ಷೆ ಡಾ. ವಾಣಿಶ್ರೀ ಐತಾಳ್ ಉದ್ಘಾಟಿಸಿದರು. ಬಳಿಕ ಮಾತನಾಡಿ, ಮಹಿಳೆಯರೇ ಇಂತಾಹದ್ದೊಂದು ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರ. ಮಹಿಳೆಯರು ಮುಂದೆ ಬಂದಾಗ ಯಶಸ್ಸು ಸಾಧ್ಯ ಎನ್ನುವುದು ಈ ಒಂದು ಮೇಳದಿಂದ ಸಾಬೀತಾಗಿದೆ ಎಂದರು.

ದೀಪಂ ಆಭರಣ ಮಳಿಗೆಯ ಸುಧಾ ಮಾತನಾಡಿ, ಭಾರತದ ಸಾಂಪ್ರದಾಯಿಕ ಶೈಲಿ, ಆಧುನಿಕ ಶೈಲಿಯ ವನ್ ಗ್ರಾಂ ಗೋಲ್ಡ್ ಆಭರಣಗಳು ಅತೀ ಕಡಿಮೆ ಬೆಲೆಯಲ್ಲಿ ನಮ್ಮಲ್ಲಿ ಸಿಗುತ್ತದೆ. ನಾವು ಕೇವಲ ಸ್ಥಳೀಯ ಮಟ್ಟ ಮಾತ್ರವಲ್ಲದೇ ದೇಶಾದ್ಯಂತ ನಮ್ಮ ಆಭರಣಗಳು ದೊರೆಯುತ್ತವೆ. ಮದುವೆ ಸಮಾರಂಭಗಳಿಗೂ ನಾವು ಅತೀ ಕಡಿಮೆ ಬೆಲೆಗೆ ಆನ್ ಲೈನ್ ಮೂಲಕವೂ ಕಳುಹಿಸುವ ವ್ಯವಸ್ಥೆ ಒದಗಿಸಲಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಮೇಘನಾ, ಇನ್ನರ್ ವೀಲ್ ಕ್ಲಬ್ ನ ಅಧ್ಯಕ್ಷೆ ಸುರೇಖಾ ಪುರಾಣಿಕ್ ಉಪಸ್ಥಿತರಿದ್ದರು.

ಬೃಹತ್ ಸಂಗ್ರಹ ಮತ್ತು ಮಾರಾಟ ಮಳಿಗೆಯಲ್ಲಿ ಸಿಲ್ಕ್ ಸಾರಿ, ಕೈಮಗ್ಗ ಸಾರಿ, ಕುರ್ತ, ಚೂಡಿದಾರ್ ಸೆಟ್, ಕಾಟನ್ ಬೆಡ್ಶೀಟ್,ಸಾಂಪ್ರದಾಯಿಕ, ಆಧುನಿಕ ದೈನಂದಿನ ಬಳಕೆಯ ದೀಪಂ 1 ಗ್ರಾಂ ಗೋಲ್ಡ್ ಆಭರಣಗಳು ಅತೀ ಕಡಿಮೆ ಬೆಲೆಗೆ ಮಾರಾಟಕ್ಕಿಡಲಾಗಿದೆ. ಅಲ್ಲದೇ ಲಕ್ಜಿ ಡ್ರಾ ಮೂಲಕ ಬಹುಮಾನ ಗೆಲ್ಲುವ ಅವಕಾಶ ಇರುತ್ತದೆ.

Click Here

LEAVE A REPLY

Please enter your comment!
Please enter your name here