ಕುಂದಾಪುರ :ನ.29ರಿಂದ ಕೋಟೇಶ್ವರದಲ್ಲಿ ರೈನ್ ಬೋ ಎಕ್ಸಿಬಿಷನ್ ಆರಂಭ

0
300

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಕರ್ನಾಟಕದಲ್ಲಿ ಪ್ರಥಮ ಬಾರಿಗೆ ರೈನ್ ಬೋ ಎಕ್ಸಿಬಿಷನ್ ನವೆಂಬರ್ 29ರಿಂದ ಕುಂದಾಪುರ-ಕೋಟೇಶ್ವರ ಸರ್ಜನ್ ಆಸ್ಪತ್ರೆಯ ಹತ್ತಿರ ಆರಂಭವಾಗಲಿದೆ. ಈ ಎಕ್ಸಿಬಿಷನ್‍ದಲ್ಲಿ ಅಂಡರ್ ವಾಟರ್ ಫಿಶ್ ಟನಲ್ ಮತ್ತು ಮತ್ಸ್ಯಕನ್ಯೆಯರು ಹಾಗೂ ಟನಲ್ ಎಕ್ಸಿಬಿಷನ್ ಇರಲಿದೆಎಂದು ರೈನ್ ಬೋ ಎಕ್ಸಿಬಿಷನ್ ಮುಖ್ಯಸ್ಥರಾದ ವಿಲ್ಸನ್ ವಿಜಯ್ ಹೇಳಿದರು.

ಅವರು ನ.28ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಪ್ರತಿ ದಿನ ಸಂಜೆ 5 ಗಂಟೆಯಿಂದ ರಾತ್ರಿ 9.30ರ ತನಕ ಎಕ್ಸಿಬಿಷನ್ ತೆರೆದಿರುತ್ತದೆ. ಪ್ರವೇಶ ಶುಲ್ಕ ಮೂರು ವರ್ಷ ಮೇಲ್ಪಟ್ಟವರಿಗೆ 80 ರೂಪಾಯಿ. ಸುರಂಗ ಮಾರ್ಗದಲ್ಲಿ ಅಕ್ವೇರಿಯಂ-ಫಿಶ್ ಟನಲ್ ಇಲ್ಲಿನ ಜನರಿಗೆ ಪರಿಚಯ ಮಾಡಲಾಗುತ್ತದೆ. ಹಾಗೂ ವಿಶೇಷವಾಗಿ ಕರ್ನಾಟಕದಲ್ಲಿ ಮತ್ಸ್ಯಕನ್ಯೆಯರನ್ನು ಪರಿಚಯಿಸಿದ ಹೆಗ್ಗಳಿಕೆ ಈ ಸಂಸ್ಥೆಗಿದೆ. ಮೂರು ಮಂದಿ ಮತ್ಸ್ಯಕನ್ಯೆಯರು ಇಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಶೇಷವಾದ ಟನಲ್‍ನಲ್ಲಿ ಮತ್ಸ್ಯಕನ್ಯೆಯರು ಈಜಾಡುತ್ತಾ ಮನೋರಂಜನೆ ನೀಡಲಿದ್ದಾರೆ ಎಂದರು.

Click Here

Click Here

ಇಲ್ಲಿ 60 ದಿನಗಳ ಪರವಾನಿಗೆ ಪಡೆದಿದ್ದೇವೆ. 45ದಿನಗಳು ನಡೆಸಲು ಉದ್ದೇಶಿಸಿದ್ದೇವೆ. ಮತ್ತೆ ಬೇಡಿಕೆ ಗಮನಿಸಿ ಮುಂದುವರಿಸಲು ಯೋಚಿಸಲಾಗುವುದು. ನಾವು ಕರ್ನಾಟಕದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಈ ಎಕ್ಸಿಬಿಷನ್ ನಡೆಸಿದ್ದೇವೆ. ಇದರಲ್ಲಿ ಮೀನುಗಳ ಮಾಯಾಲೋಕ ಇರುತ್ತದೆ. ಬೇರೆ ಬೇರೆ ರೀತಿಯ ಮಳಿಗೆಗಳು ಇರುತ್ತದೆ. ಮನೋರಂಜನಾ ಆಟಗಳು ಇರುತ್ತವೆ. ಕುಂದಾಪುರ ಭಾಗದ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ನ.29ರಂದು ಸಂಜೆ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ರೈನ್ ಬೋ ಎಕ್ಸಿಬಿಷನ್ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಅಕ್ವೇರಿಯಂ ಉದ್ಘಾಟನೆ ನೆರವೇರಿಸಲಿದ್ದಾರೆ. ಮತ್ಸ್ಯಕನ್ಯೆ ಟನಲ್ ಅನ್ನು ತಹಶೀಲ್ದಾರ್ ಶೋಭಾಲಕ್ಷ್ಮೀ ಉದ್ಘಾಟಿಸುವರು. ಉದ್ಯಮಿ ದಿನೇಶ ಹೆಗ್ಡೆ ಮೊಳಹಳ್ಳಿ ಅಮ್ಯೂಸ್‍ಮೆಂಟ್ ಪಾರ್ಕ್ ಉದ್ಘಾಟಿಸಲಿದ್ದಾರೆ ಎಂದರು.

ಶರತ್ ಶಿವಮೊಗ್ಗ ಮಾತನಾಡಿ ಇಲ್ಲಿ ಅಕ್ವೇರಿಯಂ ಫಿಶ್ ಮಾತ್ರವಲ್ಲದೆ ಬೇರೆ ಬೇರೆ ಜಾತಿಯ ವಿಶೇಷ ಮೀನುಗಳನ್ನು ನೋಡಬಹುದು. ದೈತ್ಯಗಾತ್ರದ ಮೀನುಗಳನ್ನು ಇಲ್ಲಿ ನೋಡಲು ಲಭ್ಯ. ಬೇರೆ ಬೇರೆ ರಾಜ್ಯಗಳಿಂದ ಮೀನುಗಳನ್ನು ತರಿಸಲಾಗುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸೈಯದ್, ಪ್ರವೀಣ್ ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here