ಕುಂದೇಶ್ವರ ದೇವಸ್ಥಾನದ ದೀಪೋತ್ಸವ – ನಗರದೊಳಗೆ ಸಂಜೆ ವಾಹನ ನಿಷೇಧ

0
103

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಕುಂದೇಶ್ವರ ದೇವಸ್ಥಾನದ ದೀಪೋತ್ಸವ ಪ್ರಯುಕ್ತ ಇದೇ ಬರುವ ನವಂಬರ್ 30 ಹಾಗೂ ಡಿಸೆಂಬರ್ 1 ರಂದು ಸಂಜೆ 6 ಗಂಟೆ ನಂತರ ಕುಂದಾಪುರದ ಶಾಸ್ತ್ರಿ ವೃತ್ತದಿಂದ ಹಳೆ ಬಸ್ಸು ನಿಲ್ದಾಣದ ತನಕ ಯಾವುದೇ ವಾಹನಗಳಿಗೆ ಪೇಟೆಯ ಒಳಭಾಗದಲ್ಲಿ ಪ್ರವೇಶ ವಿರುವುದಿಲ್ಲ.

Click Here

Click Here

ದೀಪೋತ್ಸವದ ಕಾರ್ಯಕ್ರಮಕ್ಕೆ ಆಗಮಿಸುವ ದ್ವಿಚಕ್ರ ವಾಹನದ ಸವಾರರು ತಮ್ಮ ಬೈಕನ್ನು ಶಾಸ್ತ್ರಿ ವೃತ್ತದ ಸಮೀಪವಿರುವ NH ನ ಅಂಡರ್ ಪಾಸ್ ಮೇಲ್ ಸೇತುವೆಯ ಕೆಳಬಾಗದ ಪಾರ್ಕಿಂಗ್ ನಲ್ಲಿ ನಿಲ್ಲಿಸತಕ್ಕದ್ದು.

ಲಘು ಹಾಗೂ ಘನ ವಾಹನಗಳಿಗೆ, ಪಾರ್ಕಿಂಗ್ ವ್ಯವಸ್ಥೆ ಇರುವುದಿಲ್ಲ ಎಂದು ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Click Here

LEAVE A REPLY

Please enter your comment!
Please enter your name here