ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಬೆಂಗಳೂರಿನ ಕಲಾಭೂಮಿ ಪ್ರತಿಷ್ಠಾನ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಗುರುತಿಸಿ ಪುರಸ್ಕಾರ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಹಿನ್ನಲ್ಲೆಯಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟಾದ ಹೆಸರಾಂತ ಸಂಗೀತ ಸಂಸ್ಥೆಯಾಗಿರುವ ಶ್ರೀ ಅಘೋರೇಶ್ವರ ಮೆಲೋಡಿಸ್ ಸಂಸ್ಥೆಯನ್ನು ಈ ಪುರಸ್ಕಾರಕ್ಕೆ ಆಯ್ಕೆಗೊಳಿಸಿದೆ. ಈ ಸಂಸ್ಥೆಯ ಸಂಗೀತ ಶಿಕ್ಷಕರಾಗಿರುವ ರವಿ ಬನ್ನಾಡಿ ಹಾಗೂ ಸಂಸ್ಥೆಯಲ್ಲಿ ಸಂಗೀತ ಕಲಿಯುತ್ತಿರುವ ಕುಂದಾಪುರ ಭಾಗದ ಮೂಡ್ಲಕಟ್ಟೆಯ ಕುಮಾರಿ ರಿಷಿಕ ಮೂಡ್ಲಕಟ್ಟೆ ಇವರುಗಳಿಗೆ ಇದೆ ಮಾ. 27ರ ಗುರುವಾರ ಕಲಾಭೂಮಿ ಯುಗಾದಿ ಪುರಸ್ಕಾರ ನೀಡಿ ಗೌರವಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.