ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಸೇನಾಪುರ ಗ್ರಾಮದ ಸರಕಾರಿ ಸ್ಥಳ ವಿಸ್ತೀರ್ಣ ಐದು ಎಕ್ರೆ ಯಲ್ಲಿ ಉಡುಪಿ ಜಿಲ್ಲಾ ಎಂಡೋಸಲ್ಪಾನ್ ಪೀಡಿತ ಅಂಗ ವಿಕಲರಿಗಾಗಿ ಪುನರ್ವಸತಿ ಕೇಂದ್ರ ಸ್ಥಾಪನೆ ಮಾಡಲು ಸ್ಥಳ ಕಾದಿರಿಸಲಾಗಿದ್ದು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಪುನರ್ವಸತಿ ಕೇಂದ್ರ ಹಾಗೂ ಸುಸಜ್ಜಿತ ಆಸ್ಪತ್ರೆ ಕಟ್ಟಡಕ್ಕೆ ಸಮಾರು ಹನ್ನೊಂದು ಕೋಟಿ ಅನುದಾನ ಬಿಡುಗಡೆ ಕೋರಿ ಸರಕಾರಕ್ಕೆ ನಪ್ರಸ್ತಾವನೆ ಮಾಡಿ ವರ್ಷ ಐದು ಕಳೆದರೂ, ಈ ತನಕ ಪುನರ್ವಸತಿ ಕೇಂದ್ರಕ್ಕೆ ಅನುದಾನ ಬಿಡುಗಡೆ ಮಾಡಿರುವುದಿಲ್ಲ. ಅಂಗವಿಕಲರ ಹಕ್ಕುಗಳ ರಾಷ್ಟ್ರೀಯ ವೇದಿಕೆ(NPRD)ಗೆ ಸಂಯೋಜಿಸಲ್ಪಟ್ಟ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ಉಡುಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಅನುದಾನ ಕೊಡಲು ಒತ್ತಾಯಿಸಿ ಕುಂದಾಪುರ ತಹಶೀಲ್ದಾರ್ ಕಚೇರಿಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಸಾಗಿ, ಧರಣಿ ಹೋರಾಟ ನಡೆಯಿತು.
ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಜಿಲ್ಲಾ ಗೌರವ ಅಧ್ಯಕ್ಷ ವೆಂಕಟೇಶ್ ಕೋಣಿ, ಅಧ್ಯಕ್ಷ ಮಂಜುನಾಥ ಹೆಬ್ಬಾರ್ ಪ್ರಧಾನ ಕಾರ್ಯದರ್ಶಿ ಕೆ.ಕೃಷ್ಣ ಪೂಜಾರಿ ಕೊಟೇಶ್ವರ, ಮುಖಂಡ ರಾದ ಬಾಬು.ಕೆ.ದೇವಾಡಿಗ ಉಪ್ಪುಂದ, ನಾಗರಾಜ ತಲ್ಲೂರು, ನಾಗಶ್ರೀ ಯಡ್ತರೆ, ಸಂತೋಷ ದೇವಾಡಿಗ ಜಾಲಾಡಿ,ವಿಲ್ಸನ್ ಪಿ.ಕೆ.,ಗಣಪತಿ ಪೂಜಾರಿ ಅಮಾಸೈಬೈಲ್ , ನಾರಾಯಣ ಶೇರುಗಾರ ಉಡುಪಿ,ಇಂದಿರಾ.ಎಸ್ ಹೆಗಡೆ,ಸದಾಶಿವ ಕಾರ್ಕಳ,ಕಾವೇರಿ ಪ್ರಸಾದ್ ಸಿದ್ಧಾಪುರ,ಮಂಜುಳ ಕಾರ್ಕಳ,ರಾಧಾಕೃಷ್ಣ.ಡಿ.ಬೈಂದೂರು,ಕೃಷ್ಣ ಬ್ರಹ್ಮಾವರ,ರಾಜಶೇಖರ ಹುಣ್ಸೆಮಕ್ಕಿ, ಆನಿತಾ.ಪಡುವರಿ, ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.