ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಶಿವಮೊಗ್ಗದಲ್ಲಿ 3ನೇ ಅಂತರಾಷ್ಟ್ರೀಯ ಮಟ್ಟದ ಓಪನ್ ಕರಾಟೆ ಪಂದ್ಯಾವಳಿ ಆ.20ರಂದು ನಡೆದಿದ್ದು, ಕುಂದಾಪುರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 3ನೇ ತರಗತಿ ಮತ್ತು ಸತ್ಯಸಾಯಿ ಸೇವಾ ಸಂಸ್ಥೆ ಬಾಲವಿಕಾಸದ ವಿದ್ಯಾರ್ಥಿನಿಯಾಗಿರುವ ಮನಸ್ವಿ ಇವರು ಕುಮಿಟೆ ವಿಭಾಗದಲ್ಲಿ ಚಿನ್ನ ಮತ್ತು ಕಟಾ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿರುತ್ತಾರೆ.
ಕ್ರಿಷಿತಾ ಇವರು ಕುಮಿಟೆ ವಿಭಾಗದಲ್ಲಿ ಬೆಳ್ಳಿ ಮತ್ತು ಕಟಾ ವಿಭಾಗದಲ್ಲಿ ಕಂಚಿನ ಪದಕ ಪಡೆದಿರುತ್ತಾರೆ.
ಇವರು ಸವಿತಾ ಪಿ.ಖಾರ್ವಿ ಇವರಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ.
ಮನಸ್ವಿ ಇವರು ಸ್ವಪ್ನ ಪ್ರಕಾಶ್ ಮತ್ತು ಕೃಷಿತಾ ಇವರು ದೀಪಾ ವೆಂಕಟೇಶ್ ಇವರ ಮಗಳಾಗಿದ್ದಾರೆ.