172 ಕಾಲುಸಂಕಗಳ ನಿರ್ಮಾಣಕ್ಕೆ ಪ್ರಸ್ತಾವನೆ, ಸಿದ್ಧಾಪುರ ಏತನೀರಾವರಿ ಯೋಜನೆಗೆ ಮಂಜೂರಾತಿ, ರೂ 1,531 ಕೋಟಿ ಅನುದಾನದಲ್ಲಿ ಅಭಿವೃದ್ದಿ ಕಾರ್ಯ -ಸಂಸದ ಬಿ.ವೈ ರಾಘವೇಂದ್ರ

0
655

ಕುಂದಾಪುರ ಮಿರರ್ ಸುದ್ದಿ…

ಬೈಂದೂರು : ಬೈಂದೂರು ಕ್ಷೇತ್ರಕ್ಕೆ ಈಗಾಗಲೇ ರೂ 1,531 ಕೋಟಿ ಅನುದಾನ ಮಂಜೂರಾಗಿದೆ. ಬಹುತೇಕ ಕಾಮಗಾರಿ ಪ್ರಗತಿಯಲ್ಲಿವೆ. ಇತ್ತೀಚೆಗೆ ಪ್ರಕೃತಿ ವಿಕೋಪದಡಿ ರೂ 41,68,200 ಪರಿಹಾರ ನೀಡಲಾಗಿದೆ. ಕ್ಷೇತ್ರದಲ್ಲಿ 250 ಕಾಲುಸಂಕಗಳನ್ನು ಪಟ್ಟಿ ಮಾಡಲಾಗಿದ್ದು ಶಾಸಕರು ಈಗಾಗಲೇ 10 ಕೋಟಿ ಹಣವನ್ನು ಲೋಕಪಯೋಗಿ ಇಲಾಖೆಯ ಮೂಲಕ ಕೊಡಿಸಲಾಗಿದ್ದು, 100 ಕಾಲುಸಂಕಗಳಿಗೆ 5 ಕೋಟಿ ಹಣವನ್ನು ಮಂಜೂರು ಮಾಡಿದೆ. 172 ಕಾಲುಸಂಕಗಳ ನಿರ್ಮಾಣಕ್ಕೆ ರೂ 20 ಕೋಟಿ ರೂಪಾಯಿಯ ಅವಶ್ಯಕತೆ ಇದ್ದು ಮಂಜೂರಾತಿಗೆ ವಿನಂತಿ ಮಾಡಲಾಗಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಅವರು ಕೊಲ್ಲೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

Click Here

Click Here

ಪ್ರಾಕೃತಿಕ ವಿಕೋಪದಲ್ಲಿ ಒಟ್ಟು ರೂ 41,68,200 ಪರಿಹಾರ ನೀಡಲಾಗಿದೆ. ಸಂಪೂರ್ಣ ಮನೆ ಹಾನಿಯಾದ ಒಟ್ಟು 12 ಫಲಾನುಭವಿಗಳಿಗೆ ತಲಾ ರೂ 95,100ರಂತೆ ಒಟ್ಟು ರೂ 11,41,200, ಹಾನಿಯಾದ ಮನೆಗಳ ದುರಸ್ಥಿಗೆ ಒಟ್ಟು 8 ಫಲಾನುಭವಿಗಳಿಗೆ ತಲಾ ರೂ 95,100ರಂತೆ ಒಟ್ಟು ರೂ 7,60,800, ಭಾಗಶ: ಹಾನಿಯಾದ ಮನೆಗಳಿಗೆ ಒಟ್ಟು 43 ಫಲಾನುಭವಿಗಳಿಗೆ ತಲಾ ರೂ 5,200ರಂತೆ ಒಟ್ಟು ರೂ 2,23,600 ಕಾಲು ಸಂಕದಿಂದ ನೀರುಪಾಲಾದ ಸನ್ನಿಧಿ ಅವರ ಕುಟುಂಬಕ್ಕೆ ರೂ 5,00,000, ಸಂಪೂರ್ಣ ಹಾನಿಯಾದ ದೋಣಿಗೆ ರೂ 9,600, ಭಾಗಶ: ಹಾನಿಯಾದ ದೋಣಿಗಳ ಒಟ್ಟು 54 ಫಲಾನುಭವಿಗಳಿಗೆ ತಲಾ 4,100ರಂತೆ ಒಟ್ಟು ರೂ 2,21,400, ಸಂಪೂರ್ಣ ಬಲೆ ಹಾನಿಯಾದ ಒಟ್ಟು 66 ಫಲಾನುಭವಿಗಳಿಗೆ ತಲಾ ರೂ 2,600ರಂತೆ ಒಟ್ಟು ರೂ 1,71,600, ಮೇಘಸ್ಫೋಟದಲ್ಲಿ ಮನೆಗಳಿಗೆ ನೀರು ತುಂಬಿ ದಿನಬಳಕೆ ವಸ್ತುಗಳು ಹಾನಿಯಾದ ಒಟ್ಟು 92 ಫಲಾನುಭವಿಗಳಿಗೆ ತಲಾ ರೂ 10,000ರಂತೆ ಒಟ್ಟು ರೂ 9,20,000, ಜಾನುವಾರು ಹಾನಿಗೆ ಒಟ್ಟು 14 ಫಲಾನುಭವಿಗಳಿಗೆ ಒಟ್ಟು ರೂ 2,20,000 ಫಲಾನುಭವಿಗಳಿಗೆ ನೀಡಲಾಗಿದೆ. ಪ್ರಾಕೃತಿಕ ವಿಕೋಪದಲ್ಲಿ ಕೃಷಿ ಬೆಳೆ ಹಾನಿಯಾದ 287 ಹೆಕ್ಟರ್ ಪ್ರದೇಶದ 349 ರೈತರ ಪ್ರಕರಣಗಳನ್ನು “ಪರಿಹಾರ” ತಂತ್ರಾಂಶದಲ್ಲಿ ದಾಖಲಿಸಲಾಗುತ್ತಿದೆ. ಅತೀ ಶೀಘ್ರದಲ್ಲಿ ರೈತರ ಖಾತೆಗೆ ಹಣ ಜಮೆಯಾಗಲಿದೆ ಎಂದರು.

ಬೈಂದೂರು ಕ್ಷೇತ್ರಕ್ಕೆ . ಕ್ಷೇತ್ರದಲ್ಲಿ ಸಂಪೂರ್ಣವಾಗಿ ಶುದ್ದ ಕುಡಿಯುವ ನೀರಿನ ಯೋಜನೆ 596 ಕೋಟಿ ಮಂಜೂರಾಗಿದ್ದು 40 ಗ್ರಾ.ಪಂಗಳ ಹಾಗೂ ಬೈಂದೂರು ಪ. ಪಂ. ವ್ಯಾಪ್ತಿಯ ಒಟ್ಟು 848 ಮನೆಗಳಿಗೆ ನೀರು ತಲುಪಿಸುವ ಯೋಜನೆಗೆ ಟೆಂಡರ್ ಆಗಿದ್ದು ಶೀಘ್ರದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುವುದು. ಮರವಂತೆಯಲ್ಲಿ ಹೊರಬಂದರು ನಿರ್ಮಾಣ ಎರಡನೇ ಹಂತದ ಕಾಮಗಾರಿಗೆ ರೂ 85 ಕೋಟಿ ಮಂಜೂರಾಗಿದ್ದು ಟೆಂಡರ್ ಆಗಿದೆ. ರೂ. 218 ಕೋಟಿ ವೆಚ್ಚದಲ್ಲಿ ಬೈಂದೂರು-ರಾಣೇಬೆನ್ನೂರು ರಾ.ಹೆ 766(ಸಿ) ರಸ್ತೆಯಲ್ಲಿ ಕೊಲ್ಲೂರು ಪೇಟೆ ಪರಿಸರದ 2.8 ಕಿ.ಮೀ ವ್ಯಾಪ್ತಿಯ ಕಾಮಗಾರಿಗೆ ಟೆಂಡರ್ ಆಗಿದೆ.
15 ಕೋಟಿ ವೆಚ್ಚದಲ್ಲಿ ಸೌಡ-ಶಂಕರನಾರಾಯಣ ಸೇತುವೆ ನಿರ್ಮಾಣ, 3.48 ಕೋಟಿ ವೆಚ್ಚದಲ್ಲಿ ಹಳ್ಳಿಹೊಳೆ ಕಬ್ಬಿನಾಲೆ ಸೇತುವೆ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದ್ದು ಅತೀ ಶೀಘ್ರದಲ್ಲಿ ಶಂಕುಸ್ಥಾಪನೆ ಮಾಡಲಾಗುವುದು ಎಂದರು.

ರೂ 96 ಕೋಟಿ ವೆಚ್ಚದ ಗಂಗೊಳ್ಳಿ ಕೋಸ್ಟಲ್ ಬರ್ತ್ ಮಂಜೂರಾಗಿದೆ. ಪಿಪಿಪಿ ಮಾದರಿಯಲ್ಲಿ ರೂ 228 ಕೋಟಿ ವೆಚ್ಚದಲ್ಲಿ ಅಂತರಾಷ್ಟ್ರೀಯ ಮಟ್ಟದ ಸೀ ಪ್ಲೇನ್, ಮರೀನಾ ಹಾಗೂ ಬಹುಪಯೋಗಿ ಬಂದರು ಯೋಜನೆ ಟೆಂಡರ್ ಹಂತದಲ್ಲಿದೆ. ರೂ 165.00 ಕೋಟಿ ವೆಚ್ಚದ ಸಿದ್ದಾಪುರ ಏತ ನೀರಾವರಿ ಯೋಜನೆ ಅನುಮೋದನೆಯಾಗಿದೆ. ರೂ. 73.71 ಕೋಟಿ ವೆಚ್ಚದಲ್ಲಿ ಸೌಕೂರು ಏತ ನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಂಡಿದೆ. ರೂ. 35.00 ಕೋಟಿ ವೆಚ್ಚದಲ್ಲಿ ಸುಬ್ಬರಾಡಿ ಕಿಂಡಿ ಅಣೆಕಟ್ಟು ಕಾಮಗಾರಿ ಪೂರ್ಣಗೊಂಡಿದ್ದು ಗೇಟ್ ಅಳವಡಿಕೆ ಕಾಮಗಾರಿ ಪ್ರಗತಿಯಲ್ಲಿದೆ. ರೂ 3.00 ಕೋಟಿ ವೆಚ್ಚದ ಸಿದ್ದಾಪುರ ಪೇಟೆ ಸರ್ಕಲ್ ಕಾಮಗಾರಿ ಪೂರ್ಣಗೊಂಡಿದೆ. ರೂ 8 ಕೋಟಿ ವೆಚ್ಚದಲ್ಲಿ ಹೊಸ ತಾಲೂಕು ಆಡಳಿತ ಸೌಧ ಕಾಮಗಾರಿ ವೇಗವಾಗಿ ನೆಡೆಯುತ್ತಿದೆ ಎಂದರು.
ಬೈಂದೂರು ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ 20 ಎಕ್ರೆಯಲ್ಲಿ ಕೈಗಾರಿಕಾ ಟೌನ್‍ಶಿಪ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೊಲ್ಲೂರು-ಕೊಡಚಾದ್ರಿ ಕೇಬಲ್ ಕಾರ್ ಯೋಜನೆಗೆ ಡಿಪಿಆರ್ ಕಾರ್ಯ ಮುಗಿದಿದ್ದು ಟೆಂಡರ್‍ಗೆ ಕೇಂದ್ರಕ್ಕೆ ಕಳುಹಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ತಲ್ಲೂರು,ಹೆಮ್ಮಾಡಿ,ತ್ರಾಸಿ,ಯಡ್ತರೆ ಹಾಗೂ ಬೈಂದೂರು ತಾಲೂಕು ಕಛೇರಿ ಬಳಿ ಒಟ್ಟು ಪ್ರಮುಖ 5 ಜಂಕ್ಷನ್ ಬಳಿ ಅಂಡರ್ ಪಾಸ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕ್ಷೇತ್ರಾದ್ಯಂತ ಒಟ್ಟು 87 ರುದ್ರಭೂಮಿಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ದಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. 1.83 ಎಕ್ರೆ ಸ್ಥಳದಲ್ಲಿ ರೂ 3.24 ಕೋಟಿ ವೆಚ್ಚದ ಪಶುವೈದ್ಯಕೀಯ ಪಾಲಿ ಕ್ಲಿನಿಕ್ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ನೆಟ್ವರ್ಕ್ ಸಮಸ್ಯೆ ಬಗೆಹರಿಸಲು ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಲಾಗಿದ್ದು. ಬಿ.ಎಸ್.ಎನ್.ಎಲ್ ವತಿಯಿಂದ ಸರ್ವೆ ಕಾರ್ಯ ನೆಡೆಯುತ್ತಿದೆ ಎಂದರು.

ಸುದ್ಧಿಗೋಷ್ಠಿಯಲ್ಲಿ ಕ್ಷೇತ್ರದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಜಿ.ಪಂ., ತಾ.ಪಂ.ಮಾಜಿ ಸದಸ್ಯರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here