ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಇಲ್ಲಿನ ರಾಮ ಮಂದಿರ ರಸ್ತೆಯ ನಿವಾಸಿ ಗಣೇಶ್ ನಾವಡ(64 ) ಅವರು ಅಲ್ಪ ಕಾಲದ ಅಸೌಖ್ಯದಿಂದ ಗುರುವಾರ ಅ.27ರ ರಾತ್ರಿ ತಮ್ಮ ಸ್ವಗ್ರಹದಲ್ಲಿ ನಿಧನರಾದರು.
ಎಸ್.ಡಿ.ಸಿ.ಸಿ. ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ರಾಗಿದ್ದ ಇವರು ಜಿಲ್ಲೆಯ ಹಲವೆಡೆ ಸೇವೆ ಸಲ್ಲಿಸಿದ್ದರು.ರಾಜ್ಯದ ಖ್ಯಾತ ಕ್ರಿಕೆಟ್ ತಂಡ ಚಕ್ರವರ್ತಿ ಯ ಮಾಜಿ ಸ್ಪಿನ್ನರ್ ಆಗಿದ್ದ ಇವರು ಚಕ್ರವರ್ತಿ ತಂಡದ ಯಶಸ್ವಿನಲ್ಲಿ ಗಣನೀಯ ಪಾತ್ರ ವಹಿಸಿದ್ದರು. ಮೃತರು ಪತ್ನಿ, ತಾಯಿ ಹಾಗೂ ಅಪಾರ ಬಂಧು ಬಾಂಧವರನ್ನು ಅಗಲಿದ್ದಾರೆ.