ಕುಂದಾಪುರ ಮಿರರ್ ಸುದ್ದಿ…
Video:
ಕುಂದಾಪುರ: ಚುನಾವಣೆ ಸನ್ನಿಹಿತವಾಗುತ್ತಿದ್ದಂತೆ ಬಿಜೆಪಿ ಧರ್ಮರಾಜಕಾರಂಕ್ಕೆ ಮುಂದಾಗಿದೆ. ಅಭಿವೃದ್ಧಿ ಕೆಲಸಗಳನ್ನೇ ಮಾಡದ ಬಿಜೆಪಿಗೆ ಸಾವರ್ಕರ್ ಹೆಸರೇ ಅಸ್ತ್ರವಾಗಿದೆ ಎಂದು ಕೆಪಿಸಿಸಿ ಕಾರ್ಯಾದ್ಯಕ್ಷ, ಉಡುಪಿ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಧ್ರುವನಾರಾಯಣ ಆಕ್ರೋಶ ಹೊರಹಾಕಿದ್ದಾರೆ.
ಕೊಲ್ಲೂರಿನ ಎ.ಎನ್.ಆರ್. ಅತಿಥಿ ಗೃಹದಲ್ಲ್ಲ್ಲಿ ಸೋಮವಾರ ನಡೆದ ಪಕ್ಷದ ಸಭೆಯಲ್ಲಿ ಮಾತನಾಡಿದರು. ಅಭಿವೃದ್ದಿ ಕೆಲಸಗಳ ಪಟ್ಟಿ ಮಾಡಲು ಬಿಜೆಪಿಗೆ ಹೆಸರೇ ಸಿಗುತ್ತಿಲ್ಲ. ಹಾಗಾಗಿ ಸಾವರ್ಕರ್ ಅದೂ ಇದು ಅಂತ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಹೂ ಎಂಬಂತೆ ಬಿಜೆಪಿ ಬಣ್ಣದ ಮಾತುಗಳನ್ನಾಡಿ ಜನರನ್ನು ಮರಳುಬಮಾಡಲು ಯತ್ನಿಸುತ್ತಿದೆ. ಆದರೆ ಇದೆಲ್ಲ ನಡೆಯುವುದಿಲ್ಲ. ಮುಮದಿನ ಚುನಾವಣೆಯಲ್ಲಿ ಜನ ಪಾಠ ಕಲಿಸುತ್ತಾರೆ ಎಂದು ಧ್ರುವ ಹೇಳಿದರು.
ನಾನೂ ಹಿಂದೂನೆ. ನಾನೂ ಪೂಜೆ ಮಾಡ್ತೇನೆ ಎಂದು ಹೇಳಿದ ಧ್ರುವನಾರಾಯಣ್, ಆದರೆ ಧರ್ಮವನ್ನು ರಾಜಕೀಯಗೊಳಿಸುವುದಿಲ್ಲ. ಧರ್ಮ, ಜಾತಿ ಬಳಸಿ ಒಂದು ಬಾರಿ ಮತಗಳಿಸಿ ಅಧಿಕಾರ ಪಡೆಯಬಹುದು. ಆದರೆ ಅದು ಶಾಶ್ವತ ಅಲ್ಲ. ಜನ ಅರ್ಥ ಮಾಡ್ಕೋತಾರೆ ಎಂದರು.
ಪ್ರತಾಪಚಂದ್ರ ಶೆಟ್ಟಿ ನಮ್ಮ ಪಕ್ಷದ ಹಿರಿಯ ಮುಖಂಡರು. ಅವರ ಮಾರ್ಗದರ್ಶನದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದ ಅವರು, ಯಾರು ಬೇಕಾದರೂ ನಮ್ಮ ಪಕ್ಷಕ್ಕೆ ಬರುವುದಾದರೆ ಸ್ವಾಗತವಿದೆ ಎಂದರು.